ಇಬ್ಬನಿ

September 10, 2007

ಮಳೆ ಸುರಿಯಬೇಕು ಎದೆಹೊಲಕ್ಕೆ…

Filed under: ಕವನ — kemmayi @ 1:26 pm

 

ಭೀಕರ ಮಳೆಗಾಲ
ವಸುದೆಯ ಹರುಶಕ್ಕೆ ಸಾಟಿಯೇ ?
ಮಯ್ಯ ತುಂಬಾ ತೆನೆತುಂಬಿ
ತೂಗುತ್ತಿದ್ದಾಳೆ, ನಲಿಯುತ್ತಿದ್ದಾಳೆ
ಎಸ್ಟೊಂದು ವ್ಯತ್ಯಾಸ !

ಇಲ್ಲಿ ಮಾನವ ಮನದಲ್ಲಿ ಒಸರು
ಬತ್ತಿ ಹೋಗಿದೆ- ಪ್ರೀತಿಯ ಒಸರು.
ಬರಡಾದ ಎದೆಗೆ ವಿಕ್ರತ
ವಿದ್ವಂಸತೆಯ ಅಟ್ಟಹಾಸ
ಪ್ರೀತಿಯ ಬೆಳೆ ಬೆಳೆಯುವಿದೇ ಇಲ್ಲ
ಮಾನವೀಯತೆಯ ಸೆಲೆ
ಹುಟ್ಟುವುದೇ ಇಲ್ಲ. ‘ನಾವು
ದೇವಮಾನವರು’ ಅಹಮಿನ
ಟೇಂಕಾರಕ್ಕೆ ಸಾದ್ವಿಗಳ ಎದೆ ನಡುಗುತ್ತದೆ.
ಸಂವತ್ಸರಗಳು 50 ಕಳೆದವು ..
ಸುಗ್ಗಿ ಸಮ್ರದ್ದಿಯಾಗಬೇಕಿದ್ದ ಕಾಲ
ಭಯದ ಮಾರುತ ನುಗ್ಗಿ ಚೆಲ್ಲಾಪಿಲ್ಲಿ.
ಒಂದೆಡೆ ಸೆಳೆತ, ಮತ್ತೊಂದೆಡೆ ಎಳೆತ
ಮದ್ದುಂಟೇ ಈ ಕ್ರೂರತೆಗೆ .
ಅಹುದು …….,
ಮಳೆ ಸುರಿಯಬೇಕು ಎದೆ ಹೊಲಕ್ಕೆ
ಪ್ರೀತಿಯ ಮಳೆ.

ಪ್ರೀತಮ್ ಕೆಮ್ಮಯಿ

Blog at WordPress.com.